ಮುಂಗಾರು ಹಿಂಗಾರು ಹಚ್ಚೊಡೆಯಲಿ
ಅನ್ನದಾತನ ತನು ಮನವರಳಲಿ;
ಜಲದೊಡಲು ಉಕ್ಕಿ ಹರಿದು
ಜೀವಲೋಕದಲಿ ನೆಮ್ಮದಿ ನೆಲೆಸಲಿ;
ಭೂದೇವಿಯ ವರಪ್ರಸಾದ ಅಕ್ಷಯವಾಗಲಿ
ಮಣ್ಣಿನ ಮಗನ ಬದುಕು ಹಸನಾಗಲಿ;
ನೇಣಿಗೆ ಕೊರಳೊಡ್ಡದೇ ರೈತ
ರಂಟೆಗೆ ಹೆಗಲೊಡ್ಡಿ ಬೆಳೆಯಲಿ ಭತ್ತ;
ನೇಗಿಲಯೋಗಿ ಹಸಿರಾಗಲಿ ಉಸಿರಾಗಲಿ
ಅವನಿಂದ ನಾವು ಉಳಿದು ಬೆಳೆಯಲಿ;
ಸ್ನೇಹಿತರೇ, ಇದನ್ನ ಇತ್ತೀಚೆಗೆ ಪ್ರಸಿದ್ಧಿಗೆ ಬರುತ್ತಿರುವ ಜನಶ್ರೀ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ"ಜನಶ್ರೀ ಆಶಯ" ವೆನ್ನೋ ಸಣ್ಣ ಕಾರ್ಯಕ್ರಮ ನೋಡಿದಾಗ ಅನಿಸಿದ್ದು. ಅದರಲ್ಲಿ ಬಳಸಿರುವ ಹಾಡು, ಬಹುಷ ಜ್ಞ್ಯಾನಪೀಠ ಪ್ರಶಸ್ತಿ ಪುರಸ್ಕ್ರತ, ಶ್ರೀ ಕುವೆಂಪು ರವರು ಬರೆದಿರುವ ಕವಿತೆಯೆನಿಸುತ್ತದೆ. ಅವರದೋ ಗರ್ಭ ಗುಡಿಯೊಳಗಿನ ದೇವರ ಮೆಲೇರಿದ ಪುಷ್ಪದಂತಹುದು. ನನ್ನದೋ, ಅದರಿಂದ ಬಿಸುಟ, ತೊಗಟೆಯಂತಹುದು. ಆದರೂ, ನನ್ನದೊಂದು ಸಣ್ಣ ಪ್ರಯತ್ನ.
ವೀರಕವಿ...............