Wednesday 25 May 2011

ಹಳ್ಳಿ ಜನ..........


          ಐಶ್ವರ್ಯ ಕಂಡವರಲ್ಲ
          ಆಡಂಬರ ನಡೆಸಿದವರಲ್ಲ;

          ಕಾಯಕ ಬಿಟ್ಟವರಲ್ಲ
          ಕಾಲ ಹರಟೆ ಮಾಡಿದವರಲ್ಲ;

          ಕಷ್ಟಕ್ಕ ಹೆದರೋರಲ್ಲ
          ಸುಖಃಕ್ಕ ಮೆರೆದೋರಲ್ಲ;

          ಒಳಗುಟ್ಟು ಬಿಟ್ಟೋರಲ್ಲ
          ಒಗ್ಗಟ್ಟು ಮುರಿದೋರಲ್ಲ;

          ಆತಂಕದ ದಿನಗಳಲೂ
          ಆಶಾ ಭಾವನೆ ತೊರೆದಿಲ್ಲ;

          ಇವರಿಲ್ಲದಿದ್ದರೆ ನಮಗೆ
          ಬೆಲೆಯೇ ಇಲ್ಲ;

                   ವೀರಕವಿ........

Monday 9 May 2011

ವರ್ಷದಾಟ!!

ವರ್ಷದಾಟ!!

          ಈ ಕೆಳಗಿನ ಸಾಲುಗಳನ್ನ, ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ಮಳೆ
          ಬಂದು ಆದ ಅನಾಹುತ ಕಂಡು, ಕೇಳಿದಾಗ ಬರೆದದ್ದು..........

          ಮಳೆ ಬಂದೈತೆ
          ನೆಲ ತೋಯ್ದೈತೆ;

          ಚಿಣ್ಣರೆಲ್ಲ ನಲಿದಾರೆ
          ಹಿರಿಯರೆಲ್ಲ ಶಪಿಸ್ಯಾರೆ;

          ಉಪ್ಪರಿಗೆಯೋರಿಗೆ ನಲಿದಾಟ
          ತ್ಯಾಪಿಯೋರಿಗೆ ನರಳಾಟ;

          ಮಣ್ಣ ಮಕ್ಕಳಿಗೆ ಸುಗ್ಗಿಕಾಲ
          ಕಡಲ ಹೈಕಳಿಗೆ ಬರಗಾಲ;

          ಆಕಾಶದಾಗ "ಮಳೆ,ಬಿಲ್ಲ" ಚಿತ್ತಾರ
          ಭೂಮ್ಯಾಗಿನ ಗಿಡ ಮರಗಳೆಲ್ಲಾ ಬಂಗಾರ;

          ಬರುತಿರಲಿ ಇಂತೇ ವರುಷಧಾರೆ
          ತರುತಿರಲಿ ಎಂದೆಂದೂ ಹರುಷದಾ ನೊರೆ;

                   ವೀರಕವಿ........