ಐಶ್ವರ್ಯ ಕಂಡವರಲ್ಲ
ಆಡಂಬರ ನಡೆಸಿದವರಲ್ಲ;
ಕಾಯಕ ಬಿಟ್ಟವರಲ್ಲ
ಕಾಲ ಹರಟೆ ಮಾಡಿದವರಲ್ಲ;
ಕಷ್ಟಕ್ಕ ಹೆದರೋರಲ್ಲ
ಸುಖಃಕ್ಕ ಮೆರೆದೋರಲ್ಲ;
ಒಳಗುಟ್ಟು ಬಿಟ್ಟೋರಲ್ಲ
ಒಗ್ಗಟ್ಟು ಮುರಿದೋರಲ್ಲ;
ಆತಂಕದ ದಿನಗಳಲೂ
ಆಶಾ ಭಾವನೆ ತೊರೆದಿಲ್ಲ;
ಇವರಿಲ್ಲದಿದ್ದರೆ ನಮಗೆ
ಬೆಲೆಯೇ ಇಲ್ಲ;
ವೀರಕವಿ........