Wednesday 25 May 2011

ಹಳ್ಳಿ ಜನ..........


          ಐಶ್ವರ್ಯ ಕಂಡವರಲ್ಲ
          ಆಡಂಬರ ನಡೆಸಿದವರಲ್ಲ;

          ಕಾಯಕ ಬಿಟ್ಟವರಲ್ಲ
          ಕಾಲ ಹರಟೆ ಮಾಡಿದವರಲ್ಲ;

          ಕಷ್ಟಕ್ಕ ಹೆದರೋರಲ್ಲ
          ಸುಖಃಕ್ಕ ಮೆರೆದೋರಲ್ಲ;

          ಒಳಗುಟ್ಟು ಬಿಟ್ಟೋರಲ್ಲ
          ಒಗ್ಗಟ್ಟು ಮುರಿದೋರಲ್ಲ;

          ಆತಂಕದ ದಿನಗಳಲೂ
          ಆಶಾ ಭಾವನೆ ತೊರೆದಿಲ್ಲ;

          ಇವರಿಲ್ಲದಿದ್ದರೆ ನಮಗೆ
          ಬೆಲೆಯೇ ಇಲ್ಲ;

                   ವೀರಕವಿ........

No comments:

Post a Comment