ವರ್ಷದಾಟ!!
ಈ ಕೆಳಗಿನ ಸಾಲುಗಳನ್ನ, ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ಮಳೆ
ಬಂದು ಆದ ಅನಾಹುತ ಕಂಡು, ಕೇಳಿದಾಗ ಬರೆದದ್ದು..........
ಮಳೆ ಬಂದೈತೆ
ನೆಲ ತೋಯ್ದೈತೆ;
ಚಿಣ್ಣರೆಲ್ಲ ನಲಿದಾರೆ
ಹಿರಿಯರೆಲ್ಲ ಶಪಿಸ್ಯಾರೆ;
ಉಪ್ಪರಿಗೆಯೋರಿಗೆ ನಲಿದಾಟ
ತ್ಯಾಪಿಯೋರಿಗೆ ನರಳಾಟ;
ಮಣ್ಣ ಮಕ್ಕಳಿಗೆ ಸುಗ್ಗಿಕಾಲ
ಕಡಲ ಹೈಕಳಿಗೆ ಬರಗಾಲ;
ಆಕಾಶದಾಗ "ಮಳೆ,ಬಿಲ್ಲ" ಚಿತ್ತಾರ
ಭೂಮ್ಯಾಗಿನ ಗಿಡ ಮರಗಳೆಲ್ಲಾ ಬಂಗಾರ;
ಬರುತಿರಲಿ ಇಂತೇ ವರುಷಧಾರೆ
ತರುತಿರಲಿ ಎಂದೆಂದೂ ಹರುಷದಾ ನೊರೆ;
ವೀರಕವಿ........
No comments:
Post a Comment