Tuesday 26 April 2011

ಮನದ ಬೇಗುದಿ!!


ಮರದಾಗ ನೆರಳಿಲ್ಲ
ಮನದಾಗ ನಲಿವಿಲ್ಲ;

ಹೊರ ಬಿಸಿಲಿಗೆ
ಕಾಯುತಿದೆ ಮೈಯಲ್ಲ;

ಒಳ ಬೇಗುದಿಗೆ
ನೊಯುತಿದೆ ಮನಸೆಲ್ಲ;

ನಿರೀಕ್ಷೆಯ ಪಯಣದಲಿ
ನಿರಾಸೆಯ ಹಾದಿ
ನುಗ್ಗುತಿದೆ ತಿರುವಿನಲಿ;

ಜಗವೇ ಜಗಝಗಿಸುತಿದೆ
ಬೆಳಕಿನೋಕುಳಿಯಲಿ;

ಕಳೆದು ಹೋಗುತಿಹೆ
ನಾ ಕತ್ತಲ ಕೂಪದಲಿ;

          ವೀರಕವಿ............

No comments:

Post a Comment