ಬಿದ್ದರೂ ಕೆಳೋದಿಲ್ಲಾ
ಸತ್ತರೂ ನೊಡೋದಿಲ್ಲಾ;
ಕಷ್ಟಕ್ಕ ಕರಗೋದಿಲ್ಲಾ
ಸಂತೋಷಕ್ಕ ನಲಿಯೋದಿಲ್ಲಾ;
ಅಂಥಾದ್ರಾಗ ಇಂವ್ನೆಲ್ಲಿಂದ
ಬಂದ ಅಣ್ಣಾ ಹಜಾರೆ?
ಲಂಚಾ ಕೊಡ್ತೀವಿ
ಕೊಟ್ಟದ್ದಕ್ಕ ಮರಗ್ತೀವಿ;
ಅನ್ಯಾಯನೂ ಮಾಡ್ತೀವಿ
ಸತ್ಯದ್ ಮಾತಾಡ್ತೀವಿ;
ಅಂಥಾದ್ರಾಗ ಇಂವ್ನೆಲ್ಲಿಂದ
ಬಂದ ಅಣ್ಣಾ ಹಜಾರೆ?
ಹುಟ್ಟ್ ಗುಣ
ಸತ್ರೂ ಹೋಗೊಲ್ಲಂತ;
ಭ್ರಷ್ಟ ಜನಾನ
ಒಮ್ಮಿಗೆ ತಡೆಯೋಕಾಗಲ್ಲಂತ;
ಅಂಥಾದ್ರಾಗ ಇಂವ್ನೆಲ್ಲಿಂದ
ಬಂದ ಅಣ್ಣಾ ಹಜಾರೆ?
ವೀರ ಕವಿ..........
No comments:
Post a Comment