Tuesday 5 April 2011

ನಿರೀಕ್ಷೆ!!!!

ಕಾರ್ಮೋಡದಲಿ ಗೋಚರಿಸೀತೆ ಬೆಳಕು
ಚಿಗುರೊಡೆದೀತೆ ಸಂತಸದ ಬದುಕು;

ದೊರಕೀತೆಂದು ಸುಖ ಶಾಂತಿ ನೆಮ್ಮದಿ
ಕಳೆದೀತೆಂದು ಬದುಕಿನ ಇಬ್ಬದಿ;
ನೋವುಂಡು ನಂಜುಂಡನಾಗಬೇಕಂತೆ
ಹಿತ ನುಡಿವವರಿಗೇನು ಕೊರತೆ;

ಚಿಂತಿಸಿದರೆ ಎನೂ ಫಲವಿಲ್ಲ
ಚಿಂತಿಸದಿದ್ದರೆ ಬದುಕಲೇನು ಸುಖವಿಲ್ಲ;

ಕನಸು ಇರಬೇಕು ಬಾಳಿನಲಿ
ಕನಸೇ ಕನಸಾಗಬಾರದು ಭವಿತವ್ಯದಲಿ;
 

               ವೀರಕವಿ.....

No comments:

Post a Comment